ಶ್ರೀನಗರ: ಪಿಡಿಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕೆ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಭೂತದ ಜತೆಗೂ ಮೈತ್ರಿಮಾಡಿಕೊಳ್ಳಲು ಸಿದ್ಧ ಎಂದು ಪಿಡಿಪಿ ಅಧ್ಯಕ್ಷೆ ಮೆಹಮೂಬಾ ಮುಫ್ತಿ ಆರೋಪಿಸಿದ್ದಾರೆ.
ಕೇಂದ್ರ ಕಾಶ್ಮೀರದ ಬಡ್ಗಾಮ್ ಜಿಲ್ಲೆಯ ಬೀರ್ವಾ ಕ್ಷೇತ್ರದಲ್ಲಿ ನಡೆದ ರೋಡ್ ಷೋ ಉದ್ದೇಶಿಸಿ ಮಾತನಾಡಿದ ಅವರು, ‘ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಅಲೆ ಎದ್ದಿರುವುದನ್ನು ನೋಡಿ ಒಮರ್ ಅಬ್ದುಲ್ಲಾ ಗಲಿಬಿಲಿಗೊಂಡಿದ್ದಾರೆ. ಚುನಾವಣೋತ್ತರ ಮೈತ್ರಿಗಾಗಿ ಬಿಜೆಪಿಗೆ ಆಹ್ವಾನಿಸುವ ಮೂಲಕ ಅವರು ಮತ್ತೊಮ್ಮೆ ಆ ಪಕ್ಷದ ಆಶ್ರಯ ಕೇಳಲು ಹೊರಟಿದ್ದಾರೆ ಎಂದು ಮೂದಲಿಸಿದರು.