ಬಸವನಬಾಗೇವಾಡಿ: ‘ಪಾಕಿಸ್ತಾನದ ಪೆಶಾವರದ ಸೇನಾಶಾಲೆಯಲ್ಲಿ ಮಕ್ಕಳನ್ನು ಹತ್ಯೆ ಮಾಡಿರುವುದು ಅಮಾನವೀಯ. ಯಾವ ಧರ್ಮವೂ ಇಂತಹ ಹಿಂಸೆಯನ್ನು ಸಹಿಸುವುದಿಲ್ಲ’ ಎಂದು ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಹೇಳಿದರು.
ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಜೈನ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯದಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುವುದು ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ಪಾಲಕರು ಮಕ್ಕಳಿಗೆ ಮಾನವೀಯ ಮೌಲ್ಯಗಳ ಮಹತ್ವ ತಿಳಿಸಬೇಕು ಎಂದು ಹೇಳಿದರು.
ವಕೀಲ ಪ್ರಕಾಶ ಹೊಸಮನಿ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ವೈಭವೀಕರಿಸುವುದು ಸರಿಯಲ್ಲ. ಉತ್ತಮ ಸಂಸ್ಕಾರದ ವಿಚಾರಗಳನ್ನು ಬಿತ್ತರಿಸುವ ಕೆಲಸಗಳಾಗಬೇಕು ಎಂದು ಹೇಳಿದರು.
ಬಾಹುಬಲಿ ವನಕುದರೆ, ರವಿ ದಂಡಾವತಿ, ಬಾಬು ಹೊಸಮನಿ, ಭೀಮು ದಂಡಾವತಿ, ಸಾಗರ ಉಪಾಧ್ಯೆ, ಅಪ್ಪು ದಂಡಾವತಿ, ಶ್ರೀಧರ ಹೊಸಮನಿ, ಪಾರಿಶ ಹೊಸಮನಿ, ಬಾಹುಬಲಿ ದಂಡಾವತಿ, ಅನಂತ ಪಾಕಿ, ಆದಿನಾಥ ನರಸಗೊಂಡ, ಶಿವಪುತ್ರ ಕೆಂಭಾವಿ, ಸನ್ಮತಿ ದಂಡಾವತಿ ಉಪಸ್ಥಿತರಿದ್ದರು.