ಈ ವೇಳೆ, ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು, ‘ಮತಾಂತರ ಅಥವಾ ಮರುಮತಾಂತರವನ್ನು ಸರ್ಕಾರ ಬೆಂಬಲಿಸುವುದಿಲ್ಲ. ಇಡೀ ದೇಶವು ಶಾಂತಿಯುತವಾಗಿದೆ. ಆದರೆ ಕೆಲವು ಜನರು ಅಸಂತುಷ್ಟರಾಗಿದ್ದಾರೆ. ಇದರಲ್ಲಿ ಸರ್ಕಾರ ಹಾಗೂ ಪಕ್ಷವನ್ನು (ಬಿಜೆಪಿ) ಎಳೆದು ತರಲಾಗಿದೆ. ಇದನ್ನು ಯಾರೋ ವೈಯಕ್ತಿಕ ವ್ಯಕ್ತಿ ಮಾಡಿದ್ದರೆ ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳಬೇಕು. ನೀವು ರಾಜಕೀಯ ಮಾಡುವುದಿದ್ದರೆ ಹೊರಗೆ ಮಾಡಿ. ನೀವು ಹೀಗೆ ಆರೋಪ ಮಾಡಲು ಸಾಧ್ಯವಿಲ್ಲ’ ಎಂದು ತಿರುಗೇಟು ನೀಡಿದರು.