ಬೆಂಗಳೂರು: ‘ಕೋಮುವಾದಿಗಳು ದನದ ಮಾಂಸದ ವಿಷಯವನ್ನು ಮತೀಯ ಸಂಘರ್ಷಗಳಿಗೆ ಪ್ರಚೋದನೆ ನೀಡಲು ಬಳಸಿಕೊಳ್ಳುತ್ತಿದ್ದಾರೆ’ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಬಿನ್ ಕ್ರಿಸ್ಟೋಫರ್ ಆರೋಪಿಸಿದರು.
ನಗರದಲ್ಲಿ ಬುಧವಾರ ಮಾತನಾಡಿದ ಅವರು, ಕೋಮು ಗಲಭೆಗಳನ್ನುಂಟು ಮಾಡುವ ಇಂತಹ ಪ್ರಚೋದನಕಾರಿ ಕೃತ್ಯಗಳ ಬಗೆಗೆ ಎಚ್ಚರ ವಹಿಸಬೇಕು ಎಂದರು.