ಆದರೆ ಭಾರತದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಈ ಭಿನ್ನಾಭಿಪ್ರಾಯಗಳನ್ನು ಬೇಗನೇ ಬಗೆಹರಿಸಿಕೊಳ್ಳಬಹುದು ಎಂದು ಸ್ವಿಟ್ಜರ್ಲೆಂಡ್ನ ವಿದೇಶಾಂಗ ಸಚಿವಾಲಯದ ಅಧಿಕಾರಿ ವ್ಯಾಲೆಂಟಿನ್ ಜೆಲ್ವೆಗರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಸ್ವಿಟ್ಜರ್ಲೆಂಡ್ನಲ್ಲಿನ ಸದ್ಯದ ಕಾನೂನಿನ ಪ್ರಕಾರ ತೆರಿಗೆ ಮರೆಮಾಚುವುದು ಕ್ರಿಮಿನಲ್ ಅಪರಾಧವಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಅಕ್ರಮಗಳಿಗೆ ಸಂಬಂಧಿಸಿದಂತೆ ಯಾವುದೇ ಗೋಪ್ಯತೆ ಎಂಬುದು ಇಲ್ಲ ಎಂದೂ ಹೇಳಿದ್ದಾರೆ.
‘ಬೇರೊಂದು ದೇಶದ ವಿಚಾರಣಾ ಸಂಸ್ಥೆ ಯಾವುದೇ ಮಾಹಿತಿ ಕೇಳಿದರೆ ಅದನ್ನು ತಡ ಮಾಡದೆ ಒದಗಿಸಲಾಗುವುದು. ‘ನಿಮ್ಮ ಗ್ರಾಹಕರನ್ನು ತಿಳಿಯಿರಿ’ (ಕೆವೈಸಿ) ನಿಯಮಾವಳಿಯನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಯಾವುದೇ ಗೋಪ್ಯತೆ ಎಂಬುದು ಇಲ್ಲ’ ಎಂದು ವಿವರಿಸಿದ್ದಾರೆ.
‘ಭಾರತ ಸರ್ಕಾರದೊಂದಿಗೆ ಈವರೆಗೆ ನಾವು ತೆರಿಗೆ ಮರೆಮಾಚುವಿಕೆಗೆ ಸಂಬಂಧಿಸಿದಂತೆ ಸುದೀರ್ಘವಾಗಿ ಚರ್ಚಿಸಿದ್ದೇವೆ. ಆದರೆ ಬೇರ್್ಯಾವುದೇ ಅಕ್ರಮಗಳ ಬಗ್ಗೆ ಮಾತುಕತೆ ನಡೆಸಿಲ್ಲ’ ಎಂದೂ ಅವರು ಹೇಳಿದ್ದಾರೆ. ತೆರಿಗೆ ಮರೆಮಾಚುವ ಪ್ರಕರಣಗಳನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಬಗ್ಗೆ ಸ್ವಿಸ್ ಸರ್ಕಾರ ಕೂಡ ಚಿಂತಿಸುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.