ಖಾಸಗಿ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ.
ಬಿಜೆಪಿ ಸರ್ಕಾರವಿದ್ದಾಗ ಅಲ್ಪಸಂಖ್ಯಾತರಿಗೆ ಭದ್ರತೆ ಇರುವುದಿಲ್ಲ ಎಂಬುದನ್ನು ಅವರು ಅಲ್ಲಗಳೆದರು. ಈಗ ಮಾತ್ರವಲ್ಲ ಸ್ವಾತಂತ್ರ್ಯನಂತರದಿಂದಲೂ ಮುಸ್ಲಿಮರು ಪರಕೀಯರೆಂಬ ಭಾವನೆಯಲ್ಲೇ ಇದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ಮಾಡಿದ ಯೋಜನೆಗಳು ಮತ್ತು ಮಸೂದೆಗಳೇ ಕಾರಣ ಎಂದರು.
ಮುಸ್ಲಿಮರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಅಂಶವೇ ಅವರನ್ನು ಪರಕೀಯ ಭಾವನೆಗೆ ತಳ್ಳಿದೆ ಎಂದು ನಜ್ಮಾ ಹೆಫ್ತುಲ್ಲಾ ಅಭಿಪ್ರಾಯಪಟ್ಟರು.