ಚುನಾವಣಾ ಪ್ರಚಾರ ಸಭೆಯುದ್ದೇಶಿಸಿ ಮಾತನಾಡಿದ ಅವರು, ‘ನೀವು ಅವರಿಗೆ ಒಂದು ಬಾರಿಗೆ ಬುದ್ಧಿ ಕಲಿಸಿ. ಅವರು ತಮ್ಮ ತಪ್ಪುಗಳನ್ನು ಅರಿಯುತ್ತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಎಂದಾದರೂ ಸರ್ಕಾರ ರಚಿಸಿದೆಯೇ? ನಾವು ಯಾವತ್ತಾದರೂ ಯಾವುದಾದರೂ ತಪ್ಪು ಎಸೆಗಿದ್ದೇವೆ? ಮೊದಲ, ಎರಡನೇ ಹಾಗೂ ಮೂರನೇ ದೋಷಿಗಳು ಯಾರೆಂದು ನಿಮಗೆ ತಿಳಿದಿಲ್ಲವೇ?’ ಎಂದು ನೆರೆದಿದ್ದ ಜನರನ್ನು ಪ್ರಶ್ನಿಸಿದರು.
ಮೂವರು ದೋಷಿಗಳು ಯಾರು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದ ಪ್ರಧಾನಿ, ಮತದಾರರು ಶಿಕ್ಷಿಸುವವರೆಗೂ ಅವರು ತಮ್ಮ ದಾರಿಗಳನ್ನು ಬದಲಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.