ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ ಬಹುರಾಷ್ಟ್ರೀಯ ಕಂಪೆನಿಗಳ ಕೈಗೊಂಬೆ’

Last Updated 15 ಏಪ್ರಿಲ್ 2014, 20:34 IST
ಅಕ್ಷರ ಗಾತ್ರ

ಆನೇಕಲ್‌:  ಬಹುರಾಷ್ಟ್ರೀಯ ಕಂಪೆನಿ­ಗಳ ಕೈಗೊಂಬೆಯಾಗಿರುವ ನರೇಂದ್ರ ಮೋದಿ ಅವರಿಂದ ದೇಶದ ಅಭಿವೃದ್ದಿ ಸಾಧ್ಯವಿಲ್ಲ ಎಂದು ರಾಜ್ಯಸಭಾ ಸದಸ್ಯ ಎಸ್.ಎಂ.ಕೃಷ್ಣ ಹೇಳಿದರು.

ಅವರು ತಾಲ್ಲೂಕಿನ ದೊಮ್ಮ­ಸಂದ್ರ­ದಲ್ಲಿ ಬೆಂಗಳೂರು ಗ್ರಾಮಾಂ­ತರ ಲೋಕ­­ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್‌ ಪರವಾಗಿ ಏರ್ಪ­­ಡಿಸಿದ್ದ ಬೃಹತ್ ಪ್ರಚಾರ ಸಭೆ­ಯನ್ನುದ್ದೇಶಿಸಿ ಮಾತನಾಡಿದರು.

ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಲಾಭಕ್ಕಾಗಿ ಮೋದಿ ಪರ ಪ್ರಚಾರ ಆರಂಭಿಸಿವೆ. ಅಮೆರಿಕದ ಕಂಪನಿಗಳು ಪ್ರಚಾರಕ್ಕಾಗಿ ಕೋಟ್ಯಂ­ತರ ರೂಪಾಯಿ ಪ್ಯಾಕೆಜ್‌ ಘೋಷಿ­ಸಿವೆ. ನಮಗೆ ವಿದೇಶಿ ಪ್ಯಾಕೇಜ್‌ ಅವಶ್ಯಕತೆಯಿಲ್ಲ. ಸ್ವದೇಶಿ ಪ್ಯಾಕೇಜ್‌ ಮೂಲಕವೇ ನಮ್ಮ ಸಾಧನೆ­ಗಳನ್ನು ಪ್ರಚಾರ ಮಾಡಿ ಮತಯಾಚನೆ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT