ಕೆಂಗೇರಿ: ‘ಕಲಾವಿದನ ಬಿಂಬ ನೋಡುಗರ ನೇತ್ರದಲ್ಲಿರುತ್ತದೆ. ರಂಗಭೂಮಿಯಲ್ಲಿ ಪಾತ್ರಧಾರಿ ಹಾಗೂ ಪ್ರೇಕ್ಷಕರಿಬ್ಬರೂ ಪರಸ್ಪರ ಅವಲಂಬಿತರು. ಆದರೆ, ಇದು ಸಿನಿಮಾ ಹಾಗೂ ದೂರದರ್ಶನದಲ್ಲಿ ಇರುವುದಿಲ್ಲ. ರಂಗಭೂಮಿಯ ಕಲೆ ಸದಾ ಜೀವಂತವಾಗಿರುತ್ತದೆ’ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.
ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆದ ರಂಗಕಿರಣ ಕಲಾವೇದಿಕೆಯ ರಂಗೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಭಗವದ್ಗೀತೆಯನ್ನು ಸುಡುವ ಮಾತು ಅವಿವೇಕ. ನಮಗೆ ಅರಿವಿನ ಬೆಳಕು ಬೇಕು. ಸುಡುವ ಬೆಂಕಿ ಅಲ್ಲ ಎಂದರು. ನಮ್ಮ ಚಿಂತನೆ ಹಾಗೂ ಕ್ರಿಯೆಗಳು ಬೆಳಕಾಗಬೇಕು’ ಎಂದರು.
ವಿಮರ್ಶಕ ಶಶಿಕಾಂತ್ ಯಡಹಳ್ಳಿ ‘ಬಹುತೇಕ ಯಶಸ್ವಿ ನಾಟಕಗಳೆಲ್ಲವೂ ಬಯಲು ರಂಗಮಂದಿರಗಳಲ್ಲಿ ನಡೆದ ದಾಖಲೆ ಇದೆ. ಬಯಲು ರಂಗಮಂದಿರಕ್ಕೆ ಪರಂಪರೆಯಿದೆ. ಕಾಲಾನಂತರ ರಂಗಭೂಮಿಗಳಾಗಿವೆ ಎಂದರು. ಡಾ. ಎಂ. ಬೈರೇಗೌಡ, ವಿಮರ್ಶಕ ಶಶಿಕಾಂತ್ ಯಡಹಳ್ಳಿ, ರಾಷ್ಟ್ರೀಯ ನಾಟಕ ಶಾಲಾ ನಿರ್ದೇಶಕ ಸಿ. ಬಸವಲಿಂಗಯ್ಯ, ರೇಣುಕಾರೆಡ್ಡಿ, ಶಂಕರ ಹೂಗಾರ ಉಪಸ್ಥಿತರಿದ್ದರು.