ಇಲ್ಲಿ ನಡೆಯುತ್ತಿರುವ ಎಲ್ಲ ರಾಜ್ಯಗಳ ಡಿಜಿ ಮತ್ತು ಐಜಿಗಳ 49ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ ಹಾಗೂ ಜೈಷ್ ಎ ಮಹಮ್ಮದ್ ಸಂಘಟನೆಗಳಿಂದ ರಾಷ್ಟ್ರದ ಭದ್ರತೆಗೆ ಬೆದರಿಕೆ ಇದ್ದೇ ಇದೆ. ಅದರ ಜತೆಗೆ ಈಗ ಸಿರಿಯಾ ಹಾಗೂ ಇರಾಕ್ನಿಂದ ಯುವಜನ ದೇಶಕ್ಕೆ ಮರಳುತ್ತಿರುವುದು ಕೂಡಾ ಭದ್ರತೆಗೆ ಸವಾಲಾಗಿದೆ. ಈ ಎರಡೂ ರಾಷ್ಟ್ರಗಳಲ್ಲಿ ಹಬ್ಬುತ್ತಿರುವ ಜಿಹಾದಿ ಹೋರಾಟ ಆತಂಕ ಸೃಷ್ಟಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.