ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿನಾಯ್ತಿ ಇದೆ’

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ವೀಸಾ ವಂಚನೆ ಪ್ರಕರಣದಲ್ಲಿ ಬಂಧನ­ಕ್ಕೊಳಗಾಗಿದ್ದ ಭಾರತದ ರಾಜ­ತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರು ವಿಚಾರಣೆ­ಯಿಂದ ವಿನಾಯ್ತಿ ಸೌಲಭ್ಯ ಹೊಂದಿ­ದ್ದಾರೆ ಎಂದು ಅವರ ಪರ ವಕೀಲರು ಹೇಳಿದ್ದಾರೆ.

ಬಂಧನದ ಅವಧಿಯಲ್ಲಿ ದೇವ­ಯಾನಿ ಅವರೊಂದಿಗೆ  ಅಧಿಕಾರಿ­ಗಳು ತೋರಿ­ರುವ ಅಮಾನವೀಯ ವರ್ತನೆಯು ಅಮೆರಿಕದ ಅಂತರ­ರಾಷ್ಟ್ರೀಯ ಶಿಷ್ಟಾಚಾರದ ಉಲ್ಲಂಘ­ನೆ­­ಯಾಗಿದೆ ಎಂದೂ ಅವರು ಹೇಳಿದ್ದಾರೆ.

‘ರಾಜತಾಂತ್ರಿಕ ಹುದ್ದೆಯನ್ನು ಹೊಂದಿದ್ದರಿಂದ ದೇವಯಾನಿ ಅವ­ರಿಗೆ  ವಿಚಾರಣೆಯಿಂದ ವಿನಾಯ್ತಿ ಇದೆ. ಆದರೆ, ಈ ಪ್ರಕರಣದಲ್ಲಿ ಅಮೆರಿಕ ತಪ್ಪು ನಿರ್ಣಯ ಕೈಗೊಂ­ಡಿದೆ’ ಎಂದು ಅವರ ಪರ ವಕೀಲ ಡೇನಿಯಲ್‌ ಎನ್‌ ಅರ್ಶಕ್‌ ಹೇಳಿದ್ದಾರೆ.

ಭಾರತ ಮತ್ತು ಅಮೆರಿಕದ ಸರ್ಕಾರ­ಗಳು ಉನ್ನತ ಮಟ್ಟದಲ್ಲಿ ಚರ್ಚಿಸಿ ಈ ಸಮಸ್ಯೆಯನ್ನು ಬಗೆ­ಹರಿಸಬಹುದು ಎಂಬ ವಿಶ್ವಾಸ­ವನ್ನೂ ಅವರು ವ್ಯಕ್ತ­ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT