ನವದೆಹಲಿ (ಪಿಟಿಐ): ‘ವಿಳಂಬ ಬೇಡ, ನಿರ್ಧಾರ ಬೇಕು’ ಎಂಬುದು ಸರ್ಕಾರದ ಮಂತ್ರ. ವಾಣಿಜ್ಯೋದ್ಯಮಕ್ಕೆ ಉತ್ತೇಜನ ನೀಡುವುದು ಸರ್ಕಾರದ ಕೆಲಸವೇ ಹೊರತು, ತಡೆಯೊಡ್ಡುವುದಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ಭಾರತೀಯ ವಾಣಿಜ್ಯೋದ್ಯಮಿಗಳ ಸಂಘ (ಅಸೋಚಾಂ) ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರ ಮತ್ತು ಉದ್ಯಮಗಳು ಸೇರಿ ಗ್ರಾಹಕರ ಕಲ್ಯಾಣಕ್ಕೆ ಶ್ರಮಿಸಬೇಕು ಎಂದರು.