ನವದೆಹಲಿ (ಪಿಟಿಐ): ಭಾರತದ ಮಹಿಳಾ ಬಾಕ್ಸರ್ ಎಲ್. ಸರಿತಾ ದೇವಿ ಅವರು ಮುಂದಿನ ತಿಂಗಳು ಕೊರಿಯದಲ್ಲಿ ನಡೆಯಲಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್ನಲ್ಲಿ ಪಾಲ್ಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂಚೆನ್ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ತಿರಸ್ಕರಿಸಿ ಅಶಿಸ್ತು ತೋರಿದ್ದಕ್ಕೆ ಸರಿತಾ ಅವರನ್ನು ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಅಮಾನತು ಮಾಡಿದೆ.
‘ಎಐಬಿಎ ಕಳುಹಿಸಿರುವ ನೋಟಿಸ್ಗೆ ಉತ್ತರ ನೀಡಿದ್ದೇನೆ. ಅಮಾನತು ಶಿಕ್ಷೆ ತೆರವಾಗುವ ವಿಶ್ವಾಸವಿದೆ’ ಎಂದು ಅವರು ಶನಿವಾರ ಹೇಳಿದ್ದಾರೆ. ‘ಈಗ ನಡೆದಿರುವ ಬೆಳವಣಿಗೆಯಿಂದ ನನಗೆ ನಿರಾಸೆಯಾಗಿದೆ. ನನ್ನ ವಾದ ಏನೆಂಬುದನ್ನು ಬಾಕ್ಸಿಂಗ್ ಇಂಡಿಯಾಕ್ಕೆ ತಿಳಿಸಿದ್ದೇನೆ. ಬಾಕ್ಸಿಂಗ್ ಇಂಡಿಯಾ ಆ ಪತ್ರವನ್ನು ಎಐಬಿಎಗೆ ನೀಡಲಿದೆ. ಆದರೆ ಪತ್ರದ ವಿವರಗಳನ್ನು ಬಹಿರಂಗಪಡಿ ಸುವುದಿಲ್ಲ. ಈ ವಿವಾದ ಶೀಘ್ರದಲ್ಲೇ ಬಗೆಹರಿಯುವ ವಿಶ್ವಾಸ ನನ್ನದು’ ಎಂದು ಅವರು ತಿಳಿಸಿದ್ದಾರೆ.