ನೆಲಮಂಗಲ: ‘ಶಿಕ್ಷಣದ ಜೊತೆಗೆ ಕ್ರೀಡೆಗೂ ಆದ್ಯತೆ ನೀಡಬೇಕು’ ಎಂದು ಬ್ಯಾಡ್ಮಿಂಟನ್ ಆಟಗಾರ ಆದರ್ಶ ಕುಮಾರ್ ತಿಳಿಸಿದರು.
ವಿಶಾಲ ಆಂಗ್ಲ ಶಾಲೆ ವತಿಯಿಂದ ಗುರುವಾರ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು, ‘ಪ್ರತಿ ಕ್ಷಣವನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಬೇಕು ಆಗ ಮಾತ್ರ ಜೀವನವು ಸುಗಮವಾಗಿರುತ್ತದೆ’ ಎಂದು ಹೇಳಿದರು. ಶಾಲೆಯ ಸ್ಥಾಪಕ ಟಿ.ಕೆ. ನರಸೇಗೌಡ ಅವರು ಆದರ್ಶಕುಮಾರ್ ಅವರನ್ನು ಸನ್ಮಾನಿಸಿದರು.