ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಪರಶುರಾಮ ಸೃಷ್ಠಿಯಲ್ಲಿ ದೈವ,ನಾಗ ಹಾಗೂ ಪ್ರಕೃತಿಯ ಆರಾಧನೆಗೆ ಹೆಚ್ಚಿನ ಮಹತ್ವವಿದ್ದು, ಪುರಾತನ ಸಾನಿಧ್ಯಗಳ ಜೀರ್ಣೋದ್ಧಾರ ದಿಂದ ಧಾರ್ಮಿಕ ಚೌಕಟ್ಟು ಬೆಸೆದಾಗ ಕುಗ್ರಾಮಗಳು ಸುಗ್ರಾಮಗಳಾಗಿ ಪರಿವರ್ತನೆಗೊಂಡ ನೂರಾರು ನಿದರ್ಶನಗಳು ಈ ತುಳುನಾಡಿನಲ್ಲಿವೆ ಎಂದರು.
ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್ ಶೆಟ್ಟಿ ಪಾದೂರು, ಶಿರ್ವ ರೋಟರಿ ಅಧ್ಯಕ್ಷ ಡಾ.ಎನ್.ಎಸ್.ಶೆಟ್ಟಿ ಅಬ್ಬೆಟ್ಟುಗುತ್ತು ಹೇರೂರು, ಹಿರಿಯ ಶಿಕ್ಷಕ ಬಿ.ಪುಂಡಲೀಕ ಮರಾಠೆ ಶಿರ್ವ, ಮಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮಾತನಾಡಿದರು.
ಮಹಾಲಿಂಗೇಶ್ವರ ದೇವಳದ ಅರ್ಚಕ ವೇದಮೂರ್ತಿ ಗುರುರಾಜ ಭಟ್, ಮುಂಬಯಿ ಸಮಿತಿ ಅಧ್ಯಕ್ಷ ಅನಿಲ್ ಶೆಟ್ಟಿ, ದೈವಸ್ಥಾನದ ಅರ್ಚಕ ತಿಮ್ಮ ಪಾತ್ರಿ ಉಪಸ್ಥಿತರಿದ್ದರು.
ಜೀಣೋದ್ಧಾರ ಕಾರ್ಯಕ್ಕೆ ಸಹ ಕರಿಸಿದ ದಾನಿಗಳನ್ನು ವಿವಿಧ ಸಂಘಟ ನೆಗಳು, ಸ್ವಯಂ ಸೇವಕರನ್ನು ಸನ್ಮಾನಿಸ ಲಾಯಿತು, ಸಮಾರಂಭದ ಅಧ್ಯಕ್ಷತೆ ಯನ್ನು ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷ ಅಣ್ಣಾವರ ಶಂಕರ ಶೆಟ್ಟಿ ಎರ್ಮಾಳು ವಹಿಸಿದ್ದರು.
ಸಮಿತಿಯ ಅಧ್ಯಕ್ಷ ಗಣೇಶ ಶೆಟ್ಟಿ ಹೇರೂರು ಸ್ವಾಗತಿಸಿ ದರು. ಮುಖ್ಯ ಶಿಕ್ಷಕ ನಿರ್ಮಲಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಗಂಧಿ ಶೆಟ್ಟಿ ಪ್ರಾರ್ಥಿಸಿದರು. ಮುಂಬಯಿ ಸಮಿತಿ ಕಾರ್ಯದರ್ಶಿ ಅನಿಲ್ ಶೆಟ್ಟಿ ಅವರು ವಂದಿಸಿದರು.