ಸರ್ಕಾರಿ ಶಾಲೆಗಳಲ್ಲಿ ಬಿಸಿ ಊಟಕ್ಕೆ ಅನ್ನ–ಸಾರು ಕೊಡುವುದರ ಬದಲಾಗಿ ಜೋಳದ ನುಚ್ಚಿನಿಂದ ಮಾಡಿದ ‘ಸಂಗಟಿ’ (ಉಪ್ಪಿಟ್ಟಿನ ಸ್ವರೂಪ) ಹಾಗೂ ಸಾರು ಕೊಟ್ಟರೆ ಒಳ್ಳೆಯದು. ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತಿ ಮುಖ್ಯವಾಗಿರುವುದರಿಂದ ಮಧ್ಯಾಹ್ನದ ಬಿಸಿ ಊಟಕ್ಕೆ ಸಂಗಟಿ–ಸಾರು ಕೊಡುವುದು ಉಚಿತ.
ಅಕ್ಕಿಯಲ್ಲಿ ಯಾವುದೇ ಬಗೆಯ ಪೌಷ್ಟಿಕಾಂಶ ಇಲ್ಲ. ಅದರಿಂದ ಮಕ್ಕಳ ಬೆಳವಣಿಗೆಗೆ ಉಪಯೋಗವಾಗುವುದಿಲ್ಲ. ಸಂಗಟಿ– ಸಾರು, ಮಕ್ಕಳ ದೈಹಿಕ ಬೆಳವಣಿಗೆಗೆ ಪೂರಕ. ತಯಾರಿಯೂ ಸುಲಭ. ಜೋಳದಿಂದ ತಯಾರಿಸಿದ ಯಾವುದೇ ಆಹಾರವು ಪೌಷ್ಟಿಕಾಂಶದಿಂದ ಕೂಡಿರುತ್ತದೆ. ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಸಂಗಟಿ ವ್ಯವಸ್ಥೆ ಆ ಸಮಸ್ಯೆ ನಿವಾರಣೆಗೂ ಸಹಕಾರಿ.