ಆಡಳಿತ ಮತ್ತು ವಿರೋಧ ಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿರುವ ಮುಸ್ಲಿಂ ಸಮಾಜದ ನಾಯಕರ ಗುಲಾಮಗಿರಿ ಸಂಸ್ಕೃತಿಯಿಂದಾಗಿ, ವರದಿ ಜಾರಿಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೇಂದ್ರ ಸರ್ಕಾರವು ಮುಸ್ಲಿಮರನ್ನು ಕೇವಲ ಮತ ಬ್ಯಾಂಕನ್ನಾಗಿ ಮಾಡಿಕೊಳ್ಳುವುದರಿಂದ ಸಮಾಜದ ಉದ್ಧಾರ ಸಾಧ್ಯವಿಲ್ಲ. ಅಲ್ಪ ಸಂಖ್ಯಾತರನ್ನು ಜೊತೆಯಲ್ಲೇ ಕರೆದೊಯ್ಯಬೇಕೆನ್ನುವ ಕಳಕಳಿ ರಾಜಕೀಯ ನಾಯಕರಲ್ಲಿ ಉಳಿದಿಲ್ಲ. ಹಾಗಾಗಿ ಈ ವಿಷಯ ಕುರಿತ ಜಾಗೃತಿ ಸಮಾವೇಶಗಳು ತಳಹಂತದಿಂದ ರಾಜ್ಯ ರಾಷ್ಟ್ರಮಟ್ಟದವರೆಗೂ ನಡೆಯಬೇಕು’ ಎಂದರು.
ಕಾರ್ಮಿಕ ಮುಖಂಡ ಜೆ. ಭಾರದ್ವಾಜ, ಜಿಲ್ಲಾ ಸಂಚಾಲಕ ರಾಜಾ ಭಕ್ಷಿ, ತಾಲ್ಲೂಕು ಸಂಚಾಲಕ ನಬಿಸಾಬ್ ಕುಷ್ಟಗಿ ಮತ್ತಿತರರು ಮಾತನಾಡಿದರು. ಸಮಾಜದ ಮುಖಂಡರಾದ ರಹೀಂಸಾಬ್ ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಇನಾಯತ್ ಸಾಬ್ ಸಿದ್ದಕಿ, ಶಾಹಮೀದ ದೋಟಿಹಾಳ, ಅಲ್ಲಾ ಗಿರಿರಾಜ, ಅಮೀನುದ್ದೀನ ಮುಲ್ಲಾ, ಜಾಕೀರ್ ಹುಸೇನ್, ಗ್ರಾ.ಪಂ ಸದಸ್ಯ ಸಲೀಂ ಸಾಬ್ ಇತರರು ಇದ್ದರು. ಆಲಂ ಪಾಷಾ ನಿರೂಪಿಸಿದರು.