ಗುವಾಹಟಿ (ಪಿಟಿಐ) : ಪಾರದರ್ಶಕ ಆಡಳಿತಕ್ಕೆ ‘ಸ್ಮಾರ್ಟ್’(SMART) ಪರಿಕಲ್ಪನೆಯ ಅಗತ್ಯವಿದೆ ಎಂದು ಗುವಾಹಟಿಯಲ್ಲಿ ನಡೆದ 49ನೇ ಡಿಜಿಪಿ/ ಐಜಿಪಿ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದರು.
ಪೊಲೀಸ್ ಪಡೆ ಹಾಗೂ ಗುಪ್ತಚರ ಇಲಾಖೆಗಳು ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಕಾಪಾಡಬೇಕು ಎಂದರು. ಸರ್ಕಾರವು ಉತ್ತಮವಾಗಿ ಆಡಳಿತ ನಡೆಸಲು ಪರಿಣಾಮಕಾರಿ ಗುಪ್ತಚರ ವ್ಯವಸ್ಥೆ ಇದೆ. ಆದರೆ ಮದ್ದುಗುಂಡು ಅಥವಾ ಶಸ್ತ್ರಾಸ್ತ್ರಗಳಿಂದ ಸರ್ಕಾರ ನಡೆಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.
‘ಸ್ಮಾರ್ಟ್’(SMART) ನೀತಿ ಎಂದರೆ ಶಿಸ್ತು, ಸೂಕ್ಷ್ಮತೆ, ಆಧುನಿಕತೆ ಮತ್ತು ಎಚ್ಚರಿಕೆಯ ಹೊಣೆಗಾರಿಕೆಯಾಗಿದೆ. ಸ್ವಾತಂತ್ರ್ಯ ನಂತರ 33,000 ಸಾವಿರ ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ಇದು ಸಣ್ಣ ಸಂಖ್ಯೆಯಲ್ಲ ಅವರ ಬಲಿದಾನಕ್ಕೆ ನಾವು ಗೌರವ ಅರ್ಪಿಸಬೇಕು ಎಂದರು.