ವ್ಯಾಪಾರಿ ಮನೋಭಾವದಿಂದ ದೂರವಾದ, ಶುದ್ಧ ಸಾಮಾಜಿಕ ಕಳಕಳಿಯ ‘ಅಂತರಾಳ’– ‘ಬರದ ಬರೆ’ (ಪ್ರ.ವಾ., ಆ. 22) ಮೆಚ್ಚುಗೆಯಾಯಿತು.
ಐತಿಹಾಸಿಕವಾಗಿ ನೋಡಿದರೆ ನಿಸರ್ಗ ಮುನಿದಾಗಲೆಲ್ಲ ಮಾನವ ಸಂಶೋಧನೆಗಳನ್ನು ಕೈಗೊಂಡು ಮುನ್ನಡೆ ಸಾಧಿಸಿದ್ದಾನೆ. ಈ ಕಾರಣದಿಂದಲೆ ನಾವು ಶಿಲಾಯುಗ, ತಾಮ್ರಯುಗ... ಕೈಗಾರಿಕಾ ಕ್ರಾಂತಿ ಇತ್ಯಾದಿಗಳನ್ನು ನೋಡುತ್ತೇವೆ. ಈ ದೃಷ್ಟಿಯಿಂದ ನೋಡಿದಾಗ ನಮ್ಮೆಲ್ಲ ಬುದ್ಧಿಶಕ್ತಿಯನ್ನು ಬಳಸಿ ನಾವು ಈಗ ‘ಹಸಿರುಯುಗಕ್ಕೆ’ ಅಡಿಪಾಯ ಹಾಕಬೇಕಾಗಿದೆ.
ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸ್ವಾವಲಂಬಿ ಗ್ರಾಮಗಳ ನಿರ್ಮಾಣ ನಮ್ಮ ಗುರಿಯಾದರೆ ಬರವನ್ನು ಎದುರಿಸಿ ಗೆಲ್ಲಬಹುದು. ಇದಕ್ಕೆ ಬೇಕಾಗಿರುವುದು ರಾಜ್ಯಕ್ಕೊಂದು ಗ್ರಾಮೀಣ ವಿಶ್ವವಿದ್ಯಾಲಯ.