ಎನ್.ಎಸ್. ರಾವ್ ಅವರ ‘ರೊಟ್ಟಿಋಣ’ ನಾಟಕವನ್ನಾಧರಿಸಿ ಪರಮೇಶ್ ಕೆ.ಆರ್. ಪೇಟೆ ಅವರು ನಿರ್ಮಿಸುತ್ತಿರುವ, ‘1944’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಈವರೆಗೂ ಬೆಂಗಳೂರು ಸುತ್ತಮುತ್ತ ಮೂವತ್ತು ದಿನಗಳ ಚಿತ್ರೀಕರಣ ನಡೆದಿದೆ.
ಇನ್ನು ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದ್ದು ಅದಕ್ಕಾಗಿ ಸದ್ಯದಲ್ಲೇ ಚಿತ್ರತಂಡ ವಿಜಯಪುರಕ್ಕೆ ತೆರಳಲಿದೆ. ಬದ್ರಿನಾಥ್ ಈ ಚಿತ್ರಕ್ಕೆ ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನೂ ಮಾಡಿದ್ದಾರೆ. ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನ, ಜ್ಞಾನೇಶ್ ಸಂಕಲನ, ಸುರೇಶ್ ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ನವೀನ್ಕೃಷ್ಣ, ಶ್ರುತಿ, ಭವ್ಯ, ಶಿವಾನಿ, ಸುಚೇಂದ್ರಪ್ರಸಾದ್, ಧೀರಜ್ಸೂರ್ಯ, ಕಾಜುವಾಲಿ, ವೀರೇಶ್ ಬೆಳಕವಾಡಿ ಇದ್ದಾರೆ.