ನೆಲಮಂಗಲ: ಸ್ಥಳೀಯ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಈಚೆಗೆ ನಡೆದ ದರೋಡೆ, ಸುಲಿಗೆ ಮತ್ತು ಕಳ್ಳತನದಲ್ಲಿ ಭಾಗಿಯಾದ 12 ಆರೋಪಿಗಳನ್ನು ಬಂಧಿಸಿ ₹35 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ಸಿಂಗ್ ತಿಳಿಸಿದರು.
ಒಟ್ಟು 15 ಪ್ರಕರಣಗಳಿಂದ ಚಿನ್ನಾಭರಣ, ಬ್ಯಾಟರಿ, ಟಾಟಾ ಏಸ್, 2 ಬೈಕ್, 1 ಆಟೊ, ಒಂದು ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ತ್ಯಾಗದಹಳ್ಳಿಯ ಗುರುಪ್ರಸಾದ್ (24), ಹ್ಯಾಡಾಳು ಗ್ರಾಮದ ಕೀರ್ತಿ (22), ಬೈಲಮೂರ್ತಿ (22), ಟಿ.ಜಿ.ಪಾಳ್ಯ ಜಯರಾಮು (21), ಬೊಮ್ಮಶೆಟ್ಟಿಹಳ್ಳಿ ಹೇಮಂತಕುಮಾರ್ (23), ಬೈರಶೆಟ್ಟಿಹಳ್ಳಿ ರಾಮು (22), ಪಟ್ಟಣದ ರಮೇಶ್, ಇಮ್ತಿಯಾಜ್ ಪಾಷ (40), ಅಲ್ಪನಾ ಸಿಂಗ್ (33), ಉತ್ತರ ಪ್ರದೇಶದ ದೀಪಕ್ ಸಿಂಗ್ (27), ಬೆಂಗಳೂರು ಆರ್.ಟಿ.ನಗರದ ಅಬ್ದುಲ್ ಜಹೀರ್ ಅಜೀಜ್ (47) ಎಂದು ಗುರುತಿಸಲಾಗಿದೆ.