‘ಭೀಮಪ್ಪ ಅವರಿಗೆ ಅಗತ್ಯ ಮಾಹಿತಿ ನೀಡಿದ್ದರೆ ಅದಕ್ಕೆ ಪೂರಕವಾದ ದಾಖಲೆಗಳನ್ನು ಬುಧವಾರ ನಡೆಯುವ ವಿಚಾರಣೆ ವೇಳೆ ಹಾಜರುಪಡಿಸಬೇಕು’ ಎಂದು ಆಯೋಗವು ಅಧಿಕಾರಿಗಳಿಗೆ ಸೂಚಿಸಿದೆ.
ಭೀಮಪ್ಪ ಅವರು ವಿವಿಧ ಸಚಿವರ ಕಚೇರಿಗೆ ಆರ್ಟಿಐ ಅಡಿ ಅರ್ಜಿ ಸಲ್ಲಿಸಿ, ‘ನಿಮ್ಮಲ್ಲಿ ಕಂಡುಬಂದಿರುವ ಪ್ರಮುಖ ಲೋಪದೋಷ ಏನು, ಅದನ್ನು ನಿವಾರಿಸಲು ಕ್ರಮ ಏನು, ಸಾರ್ವಜನಿಕರಿಂದ ಎಷ್ಟು ಅಹವಾಲು ಸ್ವೀಕರಿಸಲಾಗಿದೆ, ವಿಲೇವಾರಿ ಆದ ಅಹವಾಲು ಎಷ್ಟು, ಪಕ್ಷದ ಕಚೇರಿಯಲ್ಲಿ ಎಷ್ಟು ಬಾರಿ ಅಹವಾಲು ಸ್ವೀಕರಿಸಲಾಗಿದೆ’ ಎಂಬ ಮಾಹಿತಿ ಕೋರಿದ್ದರು.
2013ರ ನವೆಂಬರ್ ತಿಂಗಳಲ್ಲೇ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಮಾಹಿತಿ ದೊರೆತಿಲ್ಲ ಎಂದು ಭೀಮಪ್ಪ ಅವರು ಆಯೋಗಕ್ಕೆ ದೂರು ಸಲ್ಲಿಸಿದರು.