ಬಂಧಿತರು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಅಕ್ಕರೆಪೇಟೈ ಮತ್ತು ಕೀಚನ್ಕುಪ್ಪಂ ಪ್ರದೇಶಗಳಿಗೆ ಸೇರಿದವರು. ಇವರಿಗೆ ಸೇರಿದ ಎರಡು ಬೋಟುಗಳನ್ನೂ ಲಂಕಾ ಸೇನೆ ವಶಪಡಿಸಿಕೊಂಡಿದೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸುಬ್ಬರಾಜ್ ತಿಳಿಸಿದ್ದಾರೆ.
ಸೆಪ್ಟೆಂಬರ್ 22 ರಂದು ಶ್ರೀಲಂಕಾ ನೌಕಾಪಡೆ 22 ಭಾರತೀಯ ಮೀನುಗಾರರನ್ನು ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಪಾಕ್ ಜಲಸಂಧಿ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಇವರನ್ನು ವಶಕ್ಕೆ ಪಡೆಯಲಾಗಿತ್ತು.