ನವದೆಹಲಿ(ಐಎಎನ್ ಎಸ್): ರಾಜಧಾನಿಯ ರಾಜಪಥದಲ್ಲಿ ಕರ್ನಾಟಕದ ಚನ್ನಪಟ್ಟಣದ ಬೊಂಬೆಯ ಸ್ತಬ್ಧಚಿತ್ರ ಮೊದಲುಗೊಂಡು ಭಾರತದ ಸಾಂಸ್ಕೃತಿಕ ಲೋಕವೇ ಮೈದಳೆದಿತ್ತು. ಸೇನಾ ತುಕಡಿಗಳ ಕವಾಯತು, ಬ್ಯಾಂಡ್, ಮೈ ನವಿರೇಳಿಸುವ ಮೋಟಾರ್ ಬೈಕ್ ಸಾಹಸ. ಆಗಸದಲ್ಲಿ ವಾಯು ಪಡೆ ಮೂಡಿಸಿದ ಚಿತ್ತಾರ. ಈ ಮಧ್ಯೆ ವರುಣನ ಸಿಂಚನ...
- ಸೋಮವಾರ ಇಂಥದ್ದೊಂದು ಅಭೂತಪೂರ್ವ, ಐತಿಹಾಸಿಕ 66ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಅವರ ಪತ್ನಿ ಮಿಷೆಲ್, ಲಕ್ಷಾಂತರ ದೇಶಾಭಿಮಾನಿಗಳು ಸಾಕ್ಷಿಯಾದರು.