ವಿಟ್ಲ: ಎಂಡೊ ದುರಂತ ನಮ್ಮ ಕಣ್ಣೆದುರಿಗಿದ್ದು, ನಾವು ಸಾವಯವ ತರಕಾರಿಗೆ ಮೊರೆ ಹೋಗಬೇಕೆಂಬುದನ್ನು ತೋರಿಸಿಕೊಟ್ಟಿದೆ. ಮನೆ ಬಳಕೆಯ ತರಕಾರಿಗಳನ್ನು ನಾವೇ ಬೆಳೆಸಿದರೆ ಅದು ವಿಷಯುಕ್ತವಾಗಿರದೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಮೇಶ ಎಂ. ಬಾಯಾರು ಹೇಳಿದರು.
ಶಾಲೆಯಲ್ಲಿ ಬುಧವಾರ ಆಯೋಜಿಸಿದ ಸಾವಯವ ಆಹಾರ ಸರಣಿಯ ಮೊದಲ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷ ಭಾಷಣ ಮಾಡಿದರು. ಎಲ್ಲ ವಿದ್ಯಾರ್ಥಿಗಳೂ ತಮ್ಮ ಹೆಸರಿನಲ್ಲಿ ಹತ್ತಾರು ಗಿಡಗಳನ್ನು ನೆಟ್ಟು ಬೆಳೆಸಬೇಕು.