ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಯಕ್ಕೂ ಐಎಸ್ ಜಾಲ ವಿಸ್ತರಣೆ?

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಸುಳ್ಯ: ಮಂಡೆಕೋಲಿನ ಮಾವಂಜಡ್ಕದ ಸತೀಶ್ ಆಚಾರ್ಯ ಎಂಬ ಯುವಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮಹಮ್ಮದ್ ಮುಸ್ತಾಕಿಮ್ ಎಂದು ಹೆಸರು ಬದಲಾಯಿಸಿಕೊಂಡಿರುವ ಘಟನೆ ವರದಿಯಾಗಿದ್ದು, ಅವರನ್ನು ಮತ್ತೆ ಹಿಂದೂ ಧರ್ಮದಲ್ಲೆ  ಉಳಿಸಿ ಕೊಳ್ಳಲು ಮನೆಯವರು ಪ್ರಯತ್ನಿಸುತ್ತಿದ್ದಾರೆ.

ಮತಾಂತರ ಪ್ರಕರಣದ ಹಿಂದೆ ಶಂಕಿತ ಐಎಸ್ ಸಂಘಟನೆಯ ಕೈವಾಡ ಇರುವ ಕುರಿತು ಹಾಗೂ ಸುಳ್ಯಕ್ಕೂ ಅದರ ಕರಿನೆರಳು ಬಿದ್ದಿರುವ ಕುರಿತು ಶಂಕೆಗಳು ಎದ್ದಿದ್ದು, ಈ ಬಗ್ಗೆ ಈಗಾಗಲೇ ರಾಜ್ಯ ಹಾಗೂ ಕೇಂದ್ರ ಗೃಹ ಸಚಿವರಿಗೆ ದೂರು ನೀಡಲಾಗಿದೆ. ಮತಾಂತರದ ಬೇರು ಹುಡುಕುವವರೆಗೆ ನಿರಂತರ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ, ಬುಧವಾರ ಮೊದಲ ಹಂತದ ಪ್ರತಿಭಟನೆ ನಡೆಯಲಿದೆ ಎಂದು ಮಂಡೆಕೋಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ತಿಳಿಸಿದ್ದಾರೆ.

ತೀಶ್ ಆಚಾರ್ಯ ಒಂದೂವರೆ ವರ್ಷದ ಹಿಂದೆ ಕಲ್ಲಿಕೋಟೆಗೆ ಉದ್ಯೋಗಕ್ಕೆಂದು ಹೋಗಿದ್ದರು. ಅವರು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆಂಬ ವದಂತಿ ಒಂದು ತಿಂಗಳ ಹಿಂದೆ ಹರಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT