ವಿಶಾಲ್ ಎಎಪಿ ಬೆಂಬಲಿಗರಾಗಿದ್ದು, ತಮ್ಮ ಟ್ವಿಟರ್ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಅದನ್ನು ತೆಗೆದು ಹಾಕಿದ್ದಾರೆ. ಜತೆಗೆ ‘ಇನ್ನು ಮುಂದೆ ಇಂಥ ರಾಜಕೀಯ ವಿಚಾರಗಳಿಂದ ದೂರ ಉಳಿಯುತ್ತೇನೆ’ ಎಂದಿದ್ದರು. ಆದರೆ ಮುನಿಯನ್ನು ನಿಂದಿಸಿದ ದಾದ್ಲಾನಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಜೈನ ಸಮುದಾಯದ ಸದಸ್ಯರು ನವದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಸಮೀಪ ಪ್ರತಿಭಟನೆ ನಡೆಸಿದರು.