‘ರಾಹುಲ್ ಅವರು ಒಳ್ಳೆಯ ಮನುಷ್ಯ, ಬಹಳ ಒಳ್ಳೆಯ ಹುಡುಗ, ಅವರು ಉತ್ತರಪ್ರದೇಶದಲ್ಲಿ ಹೆಚ್ಚು ದಿನ ಇದ್ದರೆ ನಮ್ಮ ಜತೆ ದೋಸ್ತಿ ಆಗಬಹುದು, ಒಳ್ಳೆಯ ಜನ ಒಂದಾದರೆ ತಪ್ಪೇನು?’ ಎಂದು ಅಖಿಲೇಶ್ ಹೇಳಿದ್ದಾರೆ.
ಕಿಸಾನ್ ಮಹಾಯಾತ್ರಾದಲ್ಲಿ ರಾಹುಲ್ ಅವರು ಮೋದಿ ಮತ್ತು ಕೇಂದ್ರ ಸರ್ಕರದ ವಿರುದ್ಧ ಕಟು ಮಾತುಗಳಿಂದ ಟೀಕಿಸುತ್ತಿದ್ದರೂ ಸಮಾಜವಾದಿ ಪಕ್ಷದ ಸರ್ಕಾರದ ವಿರುದ್ಧ ಅಂತಹ ಕಠೋರ ಟೀಕೆ ಮಾಡುತ್ತಿಲ್ಲ.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮಧ್ಯೆ ಚುನಾವಣಾ ಮೈತ್ರಿ ಏರ್ಪಡುವ ಸಾಧ್ಯತೆಗಳು ಇವೆಯೇ ಎಂದು ಕೇಳಿದಾಗ, ‘ನೀವು (ಪತ್ರಕರ್ತರು) ಇದನ್ನು ರಾಜಕೀಯವಾಗಿ ಏಕೆ ನೋಡುತ್ತೀರಿ’ ಎಂದು ಕೇಳಿದರು.