ಚಾಮರಾಜನಗರ: ‘ಜಿಲ್ಲೆಯ ಲ್ಯಾಂಪ್ಸ್ ಸಹಕಾರ ಸಂಘವು ಉತ್ತಮವಾಗಿ ವಹಿವಾಟು ನಡೆಸುವ ಮೂಲಕ ರಾಜ್ಯದಲ್ಲಿ 2ನೇ ಸ್ಥಾನ ಪಡೆದಿದೆ’ ಎಂದು ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶಿವಶಂಕರಸ್ವಾಮಿ ಹೇಳಿದರು.
ನಗರದ ಲ್ಯಾಂಪ್ಸ್ ಸಂಘದ ಗೋಡೌನ್ ಆವರಣದಲ್ಲಿ ಇತ್ತೀಚೆಗೆ ನಡೆದ 2015-16ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘವು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಗಿರಿಜನರು ಸಂಗ್ರಹಿ ಸುವ ಕಿರು ಅರಣ್ಯ ಉತ್ಪನ್ನವನ್ನು ಸಂಘಕ್ಕೆ ನೀಡಿದರೆ ಮೊದಲ ಸ್ಥಾನಕ್ಕೇರ ಬಹುದು ಎಂದರು.
ಈ ತಿಂಗಳಿನಲ್ಲಿಯೇ ಸದಸ್ಯರಿಗೆ ಬೋನಸ್ ನೀಡಲು ನಿರ್ಧರಿಸಲಾಗಿದೆ. ಜೇನು ಸಂಸ್ಕರಣಾ ಘಟಕ ಸ್ಥಾಪಿಸಿ ಮಾರಾಟ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ಸರ್ಕಾರ ಹೊಸ ಆದೇಶ ಹೊರಡಿಸಿದೆ. ಅರಣ್ಯದಲ್ಲಿ ದೊರೆಯುವ 24 ಬಗೆಯ ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ಅವಕಾಶ ಕಲ್ಪಿಸಿದೆ. ಗಿರಿಜನರು ಕಾಡು ಹಾಳಾಗದಂತೆ ಉತ್ಪನ್ನ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.
ಸಂಘದ ಕಾರ್ಯದರ್ಶಿ ಕೆ.ಎಂ. ರಶೀದ್ ಬೇಗ್ ಮಾತನಾಡಿ, ₹ 44 ಲಕ್ಷ ಮೊತ್ತದಷ್ಟು ವಹಿವಾಟು ನಡೆಸಲು ಅಂದಾಜು ತಯಾರಿಸಲಾಗಿದೆ. ಜೇನು ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ ಲಾರಿ ಖರೀದಿ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.
ಇದೇ ವೇಳೆ ಶಿವಶಂಕರಸ್ವಾಮಿ ಮತ್ತು ನಿರ್ದೇಶಕರನ್ನು ಸನ್ಮಾನಿಸ ಲಾಯಿತು. ಸಭೆಯಲ್ಲಿ ಸಂಘದ ನಿರ್ದೇಶಕರಾದ ಮಹ ದೇವಮ್ಮ, ಎಂ.ಶಿವಣ್ಣ, ಚಿಕ್ಕ ರಂಗೇಗೌಡ, ಕೇತಮ್ಮ, ಜಯಮ್ಮ, ಹಾಲುಮಲೆ, ಶಿವಣ್ಣ ಹಾಜರಿದ್ದರು.