ಭಾಷಣದ ಕೆಲವು ಅಂಶಗಳು;
* ಭಯೋತ್ಪಾದಕರು ಬಂದೂಕು ಕಾರ್ಖಾನೆಗಳನ್ನು ಅಥವಾ ಬ್ಯಾಂಕ್ಗಳನ್ನು ಹೊಂದಿಲ್ಲ. ಅವರಿಗೆ ಪಾಕಿಸ್ತಾನದಂತಹ ರಾಷ್ಟ್ರಗಳಿಂದ ಬೆಂಬಲ ದೊರೆಯುತ್ತಿದ್ದು, ಭಯೋತ್ಪಾದನ ಚಟುವಟಿಕೆಗಳನ್ನು ನಡೆಸಲು ಸಹಕಾರಿಯಾಗಿದೆ.
* ಭಯೋತ್ಪಾದನೆ ಮಾನವತೆಯ ವಿರುದ್ಧದ ಅತಿ ದೊಡ್ಡ ಅಪರಾಧವಾಗಿದೆ. ಯುದ್ಧ ಅಥವಾ ರಾಜಕಾರಣಗಳಿಂದ ಏನನ್ನೂ ಅಪೇಕ್ಷಿಸದ ಮುಗ್ಧ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ.
* ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುವ ದುಸ್ಸಾಹಸಕ್ಕೆ ಮುಂದಾಗಬಾರದೆಂದು ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.