ಉತ್ತಮ ಇಳುವರಿಗೆ
* ಬಿತ್ತನೆಗಿಂತ 2-3 ವಾರ ಮೊದಲು ಭೂಮಿಗೆ ಕೊಟ್ಟಿಗೆ ಮತ್ತು ಇತರ ಗೊಬ್ಬರಗಳನ್ನು 15–20 ಸೆಂ.ಮೀ ಆಳ ಉಳುಮೆ ಮಾಡಿ ನೀಡಬೇಕು
ರೋಗಕ್ಕೆ ಮದ್ದು
* ಬಂಜೆರೋಗ, ಬಿಳಿ ನೊಣರೋಗ, ಕಾಯಿಕೊರಕ ರೋಗಗಳು ಬಾರದಿರಲು ಬೆಳೆಯಲ್ಲಿ ಕಳೆ ಇರದಂತೆ ನೋಡಿಕೊಳ್ಳಬೇಕು. ಬಿತ್ತನೆಗೆ ಬೀಜೋಪಚಾರ ಮಾಡಿದ ಬೀಜಗಳನ್ನು ಬಳಸಬೇಕು. ಕಾಯಿಕೊರಕ ರೋಗ ಬಾಧಿಸದಿರಲು ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡಬೇಕು.
ರೋಗದ ಲಕ್ಷಣ ಕಂಡುಬಂದರೆ ಬೇವಿನ ಬೀಜದ ಕಷಾಯ ಸಿಂಪಡಿಸಬೇಕು. ಬೂದಿ ರೋಗ ಹೆಚ್ಚಾದರೆ 2–3ಗ್ರಾಂ ಗಂಧಕದ ಪುಡಿಯನ್ನು ಸಿಂಪಡಿಸಬಹುದು. ಸೊರಗು ರೋಗ ಹೆಚ್ಚು ಕಂಡುಬರುವ ಪ್ರದೇಶಗಳಲ್ಲಿ ಪರ್ಯಾಯ ಬೆಳೆಯಾಗಿ ತಂಬಾಕು ಬೆಳೆದರೆ ರೋಗ ನಿಯಂತ್ರಣಕ್ಕೆ ಬರುತ್ತದೆ