ಸರ್ಕಾರ, ಸಾರಿಗೆ ನೌಕರರ ಆರೋಗ್ಯ ಸ್ಥಿತಿಗತಿ ಕುರಿತು ತಿಂಗಳಿಗೊಮ್ಮೆ ತಪಾಸಣೆ ನಡೆಸಬೇಕು. ನಿರ್ವಾಹಕ ಮತ್ತು ಚಾಲಕರು ದೈಹಿಕ, ಮಾನಸಿಕವಾಗಿ ಸಮರ್ಥರೆಂದು ಕಂಡುಬಂದರೆ ಮಾತ್ರ ಅವರನ್ನು ಕರ್ತವ್ಯಕ್ಕೆ ನಿಯೋಜಿಸಬೇಕು. ಚಾಲಕ ಮತ್ತು ನಿರ್ವಾಹಕರು ಮಾನಸಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಇದರ ನೇರ ದುಷ್ಪರಿಣಾಮವನ್ನು ಅಮಾಯಕ ಪ್ರಯಾಣಿಕರು ಅನುಭವಿಸಬೇಕಾಗುತ್ತದೆ.
ನಿರ್ವಾಹಕರೊಬ್ಬರು ಭಾನುವಾರ ನದಿಗೆ ಜಿಗಿದದ್ದು ನೋವಿನ ಸಂಗತಿ. ಮುಂದೊಂದು ದಿನ ಚಲಿಸುವ ಬಸ್ಸಿನಿಂದ ಚಾಲಕರೇ ಇಂತಹ ಅನಾಹುತಗಳನ್ನು ಮಾಡಿಕೊಳ್ಳಬಹುದು. ಮೇಲಧಿಕಾರಿಗಳು ಮುಂಜಾಗ್ರತಾ ಕ್ರಮಗಳ ಮೂಲಕ ಇಂತಹ ಅನಾಹುತಗಳನ್ನು ತಪ್ಪಿಸಬೇಕು.
–ಗೋಪಾಲ ಬ. ಪಾಂಡೇಗಾಂವಿ, ವಿಜಯಪುರ