ಬೆಂಗಳೂರು: ರೋಚಕ ಹೋರಾಟ ಕಂಡುಬಂದ ಪಂದ್ಯದಲ್ಲಿ ಕೆಚ್ಚೆದೆಯ ಆಟ ಆಡಿದ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) ತಂಡ ರಾಜ್ಯ ವಾಲಿಬಾಲ್ ಸಂಸ್ಥೆ ಮತ್ತು ದೈಹಿಕ ಶಿಕ್ಷಣ ಕ್ರೀಡಾ ಅಕಾಡೆಮಿ ಸಹಯೋಗದ 23ನೇ ರಾಜ್ಯ ‘ಎ’ ಡಿವಿಷನ್ ಸೀನಿಯರ್ ವಾಲಿಬಾಲ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಗೆದ್ದಿದೆ.
ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾ ಸಂಕೀರ್ಣದ ಅಂಗಳದಲ್ಲಿ ಸೋಮವಾರ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಕೆಎಸ್ಪಿ 25–23, 17–25, 17–25, 25–16, 15–10ರಲ್ಲಿ ಪೋಸ್ಟಲ್ ತಂಡವನ್ನು ಮಣಿಸಿತು.