‘ಕ್ಷಿಪ್ರ ಕಾರ್ಯಪಡೆಯ 6 ತುಕಡಿಗಳು, ಬಿಎಸ್ಎಫ್ ಹಾಗೂ ಸೀಮಾ ಸುರಕ್ಷಾ ಬಲದ ತಲಾ 3 ಕಂಪೆನಿಗಳು, ಒಂದು ಇಂಡೊ–ಟಿಬೆಟ್ ಬಾರ್ಡರ್ ಪಡೆ, ಕೆಎಸ್ಆರ್ಪಿಯ 40 ತುಕಡಿಗಳನ್ನು ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ. ಜತೆಗೆ 15 ಸಾವಿರಕ್ಕೂ ಹೆಚ್ಚು ಸ್ಥಳೀಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ಹೇಳಿದರು.
ನಿಷೇಧಾಜ್ಞೆ ಮುಂದುವರಿಕೆ: ನಗರದಲ್ಲಿ ಇತ್ತೀಚೆಗೆ ನಡೆದ ಗಲಭೆ ನಿಯಂತ್ರಿಸಲು ಜಾರಿಗೊಳಿಸಿದ್ದ ನಿಷೇಧಾಜ್ಞೆಯು ಮಂಗಳವಾರ ಜಾರಿಯಲ್ಲಿರಲಿದೆ.