ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಷ್ಠ ತಂಡದಲ್ಲಿ ರಾಜ್ಯದ ಮೂವರು

Last Updated 26 ಸೆಪ್ಟೆಂಬರ್ 2016, 19:47 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ತಂಡ 500ನೇ ಟೆಸ್ಟ್ ಆಡಿದ ಸಂಭ್ರಮದಲ್ಲಿ ಬಿಸಿಸಿಐ ಅಭಿಮಾನಿಗಳ ಶ್ರೇಷ್ಠ ಕನಸಿನ ಟೆಸ್ಟ್ ತಂಡವನ್ನು ಪ್ರಕಟಿಸಿದೆ.
ಕ್ರಿಕೆಟ್‌ ಪ್ರೇಮಿಗಳೇ ಮತ ಚಲಾಯಿಸಿ ಈ ತಂಡವನ್ನು ಆಯ್ಕೆ ಮಾಡಿದ್ದಾರೆ. ರಾಹುಲ್‌ ದ್ರಾವಿಡ್‌ (ಶೇ. 96) ಅವರಿಗೆ ಹೆಚ್ಚು ಮತಗಳು ಲಭಿಸಿವೆ.

ಕರ್ನಾಟಕದ ಮೂವರು ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಮಹೇಂದ್ರ ಸಿಂಗ್ ದೋನಿ ಅವರು ತಂಡದ  ನೆಚ್ಚಿನ ನಾಯಕ ಮತ್ತು ವಿಕೆಟ್‌ ಕೀಪರ್ ಆಗಿ ಹೊರಹೊಮ್ಮಿದ್ದಾರೆ.

ಅಭಿಮಾನಿಗಳ ನೆಚ್ಚಿನ ತಂಡ: ಮಹೇಂದ್ರ ಸಿಂಗ್ ದೋನಿ (ನಾಯಕ ಹಾಗೂ ವಿಕೆಟ್‌ ಕೀಪರ್‌, ಪಡೆದ ಮತಗಳು ಶೇ. 90), ಸುನಿಲ್‌ ಗಾವಸ್ಕರ್‌ (68), ವೀರೇಂದ್ರ ಸೆಹ್ವಾಗ್‌ (86), ರಾಹುಲ್ ದ್ರಾವಿಡ್‌ (96), ಸಚಿನ್‌ ತೆಂಡೂಲ್ಕರ್ (73), ವಿ.ವಿ.ಎಸ್‌ ಲಕ್ಷ್ಮಣ್‌ (58), ಕಪಿಲ್‌ ದೇವ್‌ (91),  ರವಿಚಂದ್ರನ್‌ ಅಶ್ವಿನ್‌ (53), ಅನಿಲ್‌ ಕುಂಬ್ಳೆ (92), ಜಾವಗಲ್‌ ಶ್ರೀನಾಥ್‌ (78), ಜಹೀರ್ ಖಾನ್‌ (83) ಮತ್ತು ಯುವರಾಜ್‌ ಸಿಂಗ್ (62).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT