ಮಹಾದಾಯಿ ಮತ್ತು ಕಾವೇರಿ ನದಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂಬ ಮಾತು ಜನರಿಂದ ಕೇಳಿಬರುತ್ತಿದೆ. ಒತ್ತಡ ಹೇರುವ ಉದ್ದೇಶದ ಈ ನಡೆ ಸರಿಯಾದುದು.
ಆದರೆ ರಾಜ್ಯವನ್ನು ಪ್ರತಿನಿಧಿಸುವ ಸಂಸದರಿಂದ ಅಂಥ ಒಗ್ಗಟ್ಟಿನ ಮಾತು ಕೇಳಿಬರುತ್ತಿಲ್ಲ, ಏಕೆ? ನಮ್ಮ ಎಲ್ಲ ಸಂಸದರು ಒಗ್ಗೂಡಿ ಸಮಸ್ಯೆಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರೆ, ಸರ್ಕಾರ ಮಧ್ಯಪ್ರವೇಶಿಸಲು ಆಸಕ್ತಿ ತೋರಿಸಬಹುದು. ಆದರೆ ಈ ವಿಚಾರದಲ್ಲಿ ಅವರು ವಿಫಲರಾಗಿದ್ದಾರೆ.
–ಆನಂದ ಸಣಮನಿ, ಬಗರನಾಳ, ಹುಕ್ಕೇರಿ ತಾಲ್ಲೂಕು