ಜೊಹಾರ್ ಬಹ್ರು: ಎಎಫ್ಸಿ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿ ವಿಶ್ವಾಸದ ಉತ್ತುಂಗದಲ್ಲಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ತಂಡ ಈಗ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ.
ಬುಧವಾರ ನಡೆಯುವ ನಾಲ್ಕರ ಘಟ್ಟದ ಮೊದಲ ಹಂತದ ಹೋರಾಟದಲ್ಲಿ ಬೆಂಗಳೂರಿನ ತಂಡ ಹಾಲಿ ಚಾಂಪಿಯನ್ ಜೊಹರ್ ದಾರುಲ್ ತಾಜಿಮ್ ತಂಡದ ಸವಾಲಿಗೆ ಎದೆಯೊಡ್ಡಲು ಸಜ್ಜಾಗಿದೆ. ಉಭಯ ತಂಡಗಳ ಹಣಾಹಣಿಗೆ ಲಾರ್ಕಿನ್ ಕ್ರೀಡಾಂಗಣದಲ್ಲಿ ವೇದಿಕೆಯೂ ಸಿದ್ಧವಾಗಿದೆ.
ಐ ಲೀಗ್ ಚಾಂಪಿಯನ್ ಬಿಎಫ್ಸಿಗೆ ಪಂದ್ಯಕ್ಕೂ ಮುನ್ನವೇ ಅಲ್ಪ ಹಿನ್ನಡೆ ಎದು ರಾಗಿದೆ. ಈ ತಂಡದ ಪ್ರಮುಖ ಆಟಗಾರರಾದ ಉದಾಂತ್ ಸಿಂಗ್, ಲಾಲ್ಚುನ್ಮಾವಿಯಾ ಮತ್ತು ಕೀಗನ್ ಪೆರೇರಾ ಗಾಯಗೊಂಡಿದ್ದು ದಾರುಲ್ ವಿರುದ್ಧ ಆಡುತ್ತಿಲ್ಲ. ಹೀಗಾಗಿ ಇತರ ಆಟಗಾರರ ಮೇಲೆ ಜವಾಬ್ದಾರಿ ಹೆಚ್ಚಿದೆ.