ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ತಂಡಕ್ಕೆ ಕರುಣಾ ನಾಯಕಿ

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)  ಅಕ್ಟೋಬರ್‌ 1ರಿಂದ 9ರವರೆಗೆ ಚೆನ್ನೈನಲ್ಲಿ ನಡೆಯುವ ಅಂತರ ರಾಜ್ಯ ಸೀನಿಯರ್‌ ಮಹಿಳೆಯರ ‘ಎ’ ಗುಂಪಿನ ಪ್ಲೇಟ್‌  ಲೀಗ್‌ ಏಕದಿನ ಕ್ರಿಕೆಟ್‌ ಟೂರ್ನಿಗೆ ಮಂಗಳವಾರ ರಾಜ್ಯ ತಂಡ ಪ್ರಕಟಿಸಿದೆ.

ಬೆಂಗಳೂರಿನ ವಿಕೆಟ್‌ ಕೀಪರ್‌ ಬ್ಯಾಟ್ಸ್‌ವುಮನ್‌ ಕರುಣಾ ಜೈನ್‌ ಅವರು 15 ಸದಸ್ಯರ ತಂಡವನ್ನು ಮುನ್ನಡೆಸಲಿದ್ದಾರೆ. ಜೈನ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ದಿವ್ಯಾ ಜ್ಞಾನಾನಂದ ಅವರು ಉಪ ನಾಯಕಿಯಾಗಿ ನೇಮಕವಾಗಿದ್ದಾರೆ.

ತಂಡ ಇಂತಿದೆ: ಕರುಣಾ ಜೈನ್‌ (ನಾಯಕಿ/ವಿಕೆಟ್‌ ಕೀಪರ್‌), ದಿವ್ಯಾ ಜ್ಞಾನಾನಂದ (ಉಪ ನಾಯಕಿ), ವಿ.ಆರ್‌. ವನಿತಾ, ರಕ್ಷಿತಾ ಕೃಷ್ಣಪ್ಪ, ಆಕಾಂಕ್ಷಾ ಕೊಹ್ಲಿ, ವಂದನಾ ಮಹಾಜನ್‌, ಸಿ. ಪ್ರತ್ಯೂಷಾ, ಸಹನಾ ಎಸ್‌. ಪವಾರ್‌, ಸಿಮೆನ್‌ ಹೆನಿ, ದೇವಸ್ಮಿತಾ ದತ್ತ, ರಾಮೇಶ್ವರಿ ಗಾಯಕ್ವಾಡ್‌, ಶುಭಾ ಸತೀಶ್‌, ಮೋನಿಕಾ ಪಟೇಲ್‌, ಸಂಜನಾ ಬಟ್ನಿ (ವಿಕೆಟ್‌ ಕೀಪರ್‌) ಮತ್ತು ವಿ. ಚಂದು.
ಕೋಚ್‌: ವಿ. ಕಲ್ಪನಾ.
ಬೌಲಿಂಗ್‌ ಕೋಚ್‌ ಮತ್ತು ಮ್ಯಾನೇಜರ್‌: ಶಾಂತಾ ರಂಗಸ್ವಾಮಿ.
ಫಿಸಿಯೊ: ಸಿ. ಮಹಾಲಕ್ಷ್ಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT