ಬೆಂಗಳೂರು: ಕಾವೇರಿ ವಿಷಯದಲ್ಲಿ ನಾನು ಲೋಕಸಭೆ ಅಧಿವೇಶನದಲ್ಲಿ ಅತ್ತಿದ್ದೆ. ಈ ವಯಸ್ಸಿನಲ್ಲಿಯೂ ನಾನು ಅಳಬೇಕಾ? ಹೀಗೆ ಹೇಳುತ್ತಾ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಗದ್ಗದಿತರಾದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, ನಾಳೆ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ನಾನು ಭಾಗವಹಿಸುವುದಿಲ್ಲ. ಸಭೆಯಲ್ಲಿ ಭಾಗವಹಿಸಲು ನನಗೆ ಆಹ್ವಾನವಿಲ್ಲ ಎಂದಿದ್ದಾರೆ.
ಕಾವೇರಿ ವಿಷಯದ ಬಗ್ಗೆ ಮಾತನಾಡಿದ ಗೌಡರು, ಒಬ್ಬರನ್ನು ಗೋಡೆಯವರೆಗೆ ತಳ್ಳಬಹುದು. ಆಮೇಲೆ ಯಾರಾದರೂ ತಿರುಗಿ ಬಿದ್ದೇ ಬೀಳ್ತಾರೆ. ಯಾವುದೇ ಕಾರಣಕ್ಕೂ ನೀರು ಬಿಡಬಾರದು. ನಮಗೇ ಇಲ್ಲಿ ನೀರಿಲ್ಲದೇ ಇರುವಾಗ ತಮಿಳುನಾಡಿಗೆ ಬಿಡುವುದಾದರೂ ಹೇಗೆ?
ತಮಿಳುನಾಡಿನಲ್ಲಿ ಬೆಳೆ ಒಣಗುತ್ತಿದೆ ಎಂದು ಅವರು ಹೇಳುತ್ತಿದ್ದಾರೆ. 3-4 ದಿನಗಳಲ್ಲಿ ಬೆಳೆ ಒಣಗುತ್ತಾ? ಹೀಗೊಂದು ಮಾತನ್ನು ನಾನು ಮೊದಲ ಬಾರಿಗೆ ಕೇಳುತ್ತಿದ್ದೇನೆ.
ಜಯಲಲಿತಾ ಅವರು ಬೇಗ ಹುಷಾರಾಗಲಿ ಎಂದು ಹಾರೈಸಿದ ಗೌಡರು, ಹೆಣ್ಣು, ಭೂಮಿಗಾಗಿ ಯುದ್ದ ನಡೆದ ಇತಿಹಾಸವಿದೆ. ನೀರಿಗಾಗಿ ಯುದ್ಧ ನಡೆಯುವ ಸಂದರ್ಭ ಬರದಿರಲಿ ಎಂದಿದ್ದಾರೆ.