ಮೂರ್ಖನ ಮಾತುಗಳು!...
ದೇವ ದೇಶ ದೇಹ, ಲೇ: ಅಹೋರಾತ್ರ, ಪ್ರ: ಸಾವಣ್ಣ ಎಂಟರ್ಪ್ರೈಸಸ್, ನಂ. 57, 1ನೇ ಮಹಡಿ, ಪುಟ್ಟಣ್ಣರಸ್ತೆ, ಬಸವನಗುಡಿ, ಬೆಂಗಳೂರು–04
ಅಹೋರಾತ್ರ ಅವರ ಈ ಪುಸ್ತಕದ ಹೆಸರು ‘ಮೂರ್ಖನ ಮಾತುಗಳು!...’ ಇದು ಓದುಗರನ್ನು ಸೆಳೆಯಲು ಇಟ್ಟ ಹೆಸರಾಗಿರಬಹುದಾದರೂ ವ್ಯಕ್ತಿಯೊಬ್ಬ ಕಂಡ ಬದುಕಿನ ಹಲ ಬಗೆಯ ನೋಟಗಳನ್ನು ಈ ಬರವಣಿಗೆ ಒಳಗೊಂಡಿದೆ. ಅದು ದೇವರು, ದೇಹ, ದೇಶದ ಬಗ್ಗೆ ಮುಖ್ಯವಾಗಿ ಮಾತನಾಡುತ್ತದೆ. ವ್ಯಕ್ತಿತ್ವ ವಿಕಸನ ಬರಹಗಳ ಸರಣಿಯಲ್ಲಿ ಈ ಪುಸ್ತಕ ಬೇರೊಂದು ರೀತಿಯ ಪ್ರಯತ್ನವಾಗಿದೆ. ವ್ಯಕ್ತಿತ್ವ ವಿಕಸನ ಪುಸ್ತಕಗಳು ಒಳಗೊಳ್ಳುವ ದೃಷ್ಟಾಂತ, ಕತೆ, ಉದಾಹರಣೆಗಳ ಮೂಲಕವೇ ಇದೂ ಮನುಷ್ಯ ಸ್ವಭಾವ, ಬದುಕಿನ ಬಗ್ಗೆ ಮಾತನಾಡಲು ಹೊರಡುತ್ತದೆ. ಅದರ ಹಿನ್ನೆಲೆಯಲ್ಲಿರು