‘ಪ್ರೀತಿ ಮಾಡುತ್ತಿರುವ ವಿಷಯವನ್ನು ಸ್ನೇಹಿತರ ಬಳಿ ಹೇಳಿಕೊಂಡಿದ್ದ ಮಧು–ರೇಖಾ, ಪೋಷಕರಿಗೆ ಆ ಸಂಗತಿ ತಿಳಿಸಿರಲಿಲ್ಲ. ಮದುವೆಗೆ ಒಪ್ಪುವುದಿಲ್ಲ ಎಂಬ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಯಾವುದೇ ಮರಣ ಪತ್ರ ಸಿಕ್ಕಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ನಾನೇ ಮದುವೆ ಮಾಡಿಸುತ್ತಿದ್ದೆ’
‘ಎಸ್ಸೆಸ್ಸೆಲ್ಸಿ ಓದಿದ್ದ ಮಗಳು, ನಂತರ ಶಿಕ್ಷಣ ಮುಂದುವರಿಸಲಿಲ್ಲ. ಮಧುನನ್ನು ಪ್ರೀತಿಸುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದರೆ, ಸಂತೋಷದಿಂದ ಮದುವೆ ಮಾಡಿಸುತ್ತಿದ್ದೆ. ತಾನು ಜೀವ ಬಿಡುವುದರ ಜತೆಗೆ, ನಮಗೂ ಅನ್ಯಾಯ ಮಾಡಿದಳು’ ಎಂದು ವೆಂಕಟರಮಣ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.