ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ತನ್ನ ಲಾಭಾಂಶದ ₹ 43.46 ಕೋಟಿಯನ್ನು ಸರ್ಕಾರಕ್ಕೆ ಸಲ್ಲಿಸಿತು.
ಗುರುವಾರ ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಲಾಭಾಂಶ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಿ. ಕುಮಾರ ನಾಯಕ ಅವರು ಹಸ್ತಾಂತರಿಸಿದರು.
ಕೆಪಿಸಿಎಲ್ 2015–16ನೇ ಸಾಲಿನಲ್ಲಿ ವಿದ್ಯುತ್ ಮಾರಾಟದಿಂದ 8,067 ಕೋಟಿ ವಹಿವಾಟು ನಡೆಸಿದೆ. ಇದರಲ್ಲಿ ತೆರಿಗೆ ಪೂರ್ವದ ಲಾಭ ₹277 ಕೋಟಿ ಮತ್ತು ತೆರಿಗೆ ನಂತರದ ಲಾಭ ₹182 ಕೋಟಿ ಇದೆ ಎಂದು ಪ್ರಕಟಣೆ ತಿಳಿಸಿದೆ.