ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ ಸೇರಿದಂತೆ ಎಲ್ಲರೂ ಈ ಯೋಜನೆ ವಿರೋಧಿಸಿದ್ದಾರೆ. ಆದರೆ, ಜಾರ್ಜ್ ಅವರಿಗೆ ನನ್ನ ಮೇಲೆ ಮಾತ್ರ ಏಕೆ ಇಷ್ಟೊಂದು ಸಿಟ್ಟು’ ಎಂದೂ ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಅಭಿವೃದ್ಧಿಗೆ ಇದೇ ಸರ್ಕಾರ ರಚಿಸಿರುವ ವಿಷನ್ ಗ್ರೂಪ್ ಸದಸ್ಯರಿಗೆ ಈ ಯೋಜನೆ ಬಗ್ಗೆ ತೀವ್ರ ಸಂಶಯವಿದೆ. ಈ ವರ್ಷ ಜೂನ್ ತಿಂಗಳಿನಲ್ಲಿ ₹1,350 ಕೋಟಿ ಇದ್ದ ಯೋಜನಾ ಮೊತ್ತ ಈಗ ₹ 1,791 ಕೋಟಿ ಹೆಚ್ಚಳವಾಗಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ ಎಂದೂ ಅವರು ಹೇಳಿದ್ದಾರೆ.