‘ಹೊಟ್ಟೆ ತುಂಬಿದವರಿಗೆ ಅರೆಹೊಟ್ಟೆಯವರ ಸಂಕಟ ಅರ್ಥವಾಗದು’ ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್! ಸಿ.ಎಂ. ಇಬ್ರಾಹಿಂ ಮತ್ತು ತಮ್ಮ (ವಿಶ್ವನಾಥ್) ಬಗ್ಗೆ ಮುಖ್ಯಮಂತ್ರಿ ನೀಡಿದ ಹೇಳಿಕೆಗೆ ಅವರು ಈ ಪ್ರತಿಹೇಳಿಕೆ ನೀಡಿದ್ದಾರೆ.
ಹಾಗಿದ್ದರೆ ಹೊಟ್ಟೆ ತುಂಬಿಸಿಕೊಳ್ಳುವುದೊಂದೇ ರಾಜಕಾರಣಿಗಳ ಏಕೈಕ ಗುರಿಯೇ? ಜನರು ತಮ್ಮ ಪ್ರತಿನಿಧಿಗಳನ್ನಾಗಿ ಇವರನ್ನು ಚುನಾಯಿಸಿರುವುದು ಏತಕ್ಕಾಗಿ? ಚೆನ್ನಾಗಿ ತಿಂದು ಹೊಟ್ಟೆ ತುಂಬಿಸಿಕೊಂಡು ಹಾಯಾಗಿರಿ ಎಂದೇ?
-ಪಿ.ಜೆ.ರಾಘವೇಂದ್ರ, ಮೈಸೂರು