ರಾಯಚೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ನಾಡಿನ ನೆಲ, ಜಲ ಹಾಗೂ ಶಿಕ್ಷಣದ ಸವಾಲುಗಳ ಬಗ್ಗೆ ಮುಕ್ತವಾದ ಚರ್ಚೆ ಆಗಬೇಕಿದೆ. ರಾಜ್ಯ ಹಲವಾರು ಜಲ ವಿವಾದಗಳನ್ನು ಎದುರಿಸುತ್ತಿದೆ.
ಮುಖ್ಯವಾಗಿ ಉತ್ತರ ಕರ್ನಾಟಕದ ಜನರ ಕೂಗಾದ ಮಹಾದಾಯಿ ನದಿ ತಿರುವು ಯೋಜನೆ ಜಾರಿ ಕುರಿತು ಮುಂದಿನ ಹೋರಾಟದ ಬಗ್ಗೆ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಕಾವೇರಿ ನದಿ ನೀರು ಹಂಚಿಕೆಯ ಕಾನೂನಿನ ಸವಾಲುಗಳ ಕುರಿತು ಚರ್ಚಿಸಬೇಕಿದೆ.
ನಾಡಿನ ಭಾಷೆ, ಭೌಗೋಳಿಕತೆ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಇರುವ ಹಲವಾರು ಸಮಸ್ಯೆಗಳಿಗೆ ಅಭಿವೃದ್ಧಿಯ ಮಾರ್ಗಗಳನ್ನು ಕಂಡುಕೊಳ್ಳುವ ಬಗ್ಗೆ ಮುಕ್ತವಾದ ಚರ್ಚೆಯಾಗಲಿ.
-ಶಿವಮಲ್ಲಯ್ಯ ಬನ್ನಿಗನೂರು, ಸಿಂಧನೂರು