ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ನೇತೃತ್ವದ ಜಮಾತ್–ಉದ್ ದಾವಾ ಸಂಘಟನೆ ವತಿಯಿಂದ ಉರಿ ದಾಳಿ ವೇಳೆ ಹತನಾದ ಉಗ್ರನಿಗೆ ಶ್ರದ್ಧಾಂಜಲಿ ಪ್ರಾರ್ಥನೆ ಸಲ್ಲಿಸಲಾಗಿತ್ತು. ಈ ಶ್ರದ್ದಾಂಜಲಿ ಕಾರ್ಯಕ್ರಮದ ನಂತರ ಹಫೀಜ್ ಸಯೀದ್ ಅವರ ವಿಶೇಷ ಭಾಷಣವೂ ಇತ್ತು. ಈ ಕಾರ್ಯಕ್ರಮಗಳ ನಡೆದದ್ದು ಪಾಕಿಸ್ತಾನದ ಗುಜರಣ್ವವಾಲಾ ನಗರದಲ್ಲಿ ಎಂದು ಪೋಸ್ಟರ್ ವೊಂದರಲ್ಲಿ ಉಲ್ಲೇಖಿಸಲಾಗಿದ್ದು, ಪೋಸ್ಟರ್ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.