ಹಲಗೂರು(ಮಳವಳ್ಳಿ): ತಾಲ್ಲೂಕಿನ ಧನಗೂರು ಮೀಸಲು ಅರಣ್ಯಪ್ರದೇಶದಲ್ಲಿ ಸೋಮವಾರ ರಾತ್ರಿ ಗಂಧದಮರಗಳನ್ನು ಕತ್ತರಿಸುತ್ತಿದ್ದ ಮೂವರು ಆರೋಪಿಗಳಲ್ಲಿ ಇಬ್ಬರು ವ್ಯಕ್ತಿಗಳನ್ನು ಅರಣ್ಯ ಇಲಾಖೆವರು ವಶಪಡಿಸಿಕೊಂಡಿದ್ದು ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ.
ತಾಲ್ಲೂಕಿನ ಮಾಸ್ಟರ್ ದೊಡ್ಡಿಯ ಕುಮಾರ್, ಶಿವು ಮತ್ತು ಕುಪ್ಪೆದೊಡ್ಡಿಯ ರವಿ ಎಂಬುವವರು ರಾತ್ರಿ ಸಾಲುಣಸೆ ಅರಣ್ಯಪ್ರದೇಶದ ಬಳಿ ಗಂಧದ ಮರಗಳನ್ನು ಕತ್ತರಿಸುತ್ತಿದ್ದು ಶಬ್ಧ ಕೇಳಿ ರಾತ್ರಿ ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯವರು ದಾಳಿ ನಡೆಸಿ ಕುಮಾರ್, ಶಿವು ಹಾಗೂ 20 ಕೆ.ಜಿ.ಯಷ್ಟು ಗಂಧದ ತುಂಡುಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ರವಿ ಎಂಬ ವ್ಯಕ್ತಿ ಪರಾರಿಯಾಗಿದ್ದಾನೆ.
ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಮಾರ್ಗದರ್ಶನದಲ್ಲಿ ನಂದೀಶ್, ಸಾಜುಪ್ರಾನ್ಸಿಸ್, ಮಂಜುನಾಥ್,ವಿನಯ್,ಬಸವರಾಜು ಇದ್ದರು.