ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಯ್ಯಾಸ್ ರೆಸ್ಟೊರೆಂಟ್ ರಾಜ್ಯದ ವಿವಿಧ ಭಾಗಗಳ ಖಾದ್ಯ ಸವಿಯುವ ಅವಕಾಶ ಕಲ್ಪಿಸಿದೆ. ಈ ಮೊದಲು ಉಡುಪಿ ಭಾಗದ ಊಟವನ್ನು ಮಾತ್ರ ಉಣಬಡಿಸುತ್ತಿದ್ದ ಮಯ್ಯಾಸ್ನಲ್ಲಿ ಇದೀಗ ಉತ್ತರ ಕರ್ನಾಟಕ, ಮಂಗಳೂರು, ಧಾರವಾಡ, ಹಳೇ ಮೈಸೂರು ಭಾಗದ ಮುಖ್ಯ ಖಾದ್ಯಗಳನ್ನು ಸವಿಯುವ ಅವಕಾಶವಿದೆ.
ಮುದ್ದೆ, ಸಾರು, ಜೋಳದ ರೊಟ್ಟಿ, ಶೇಂಗಾ ಚಟ್ನಿ, ಗುರೆಳ್ಳು, ಬೆಣ್ಣೆ, ಮಂಗಳೂರು ಬಜ್ಜಿ, ಖಾರ ಕಡುಬು, ಜೀರಾ ರೈಸ್, ಸಿಹಿ ತಿನಿಸಿನಲ್ಲಿ ಮಂಗಳೂರು ಬನ್ಸ್, ಕರದಂಟು, ಧಾರವಾಡ ಪೇಡ, ಹಯಗ್ರೀವ, ಸಿಹಿ ಕಡುಬು, ಅನ್ನದ ಕೇಸರಿಭಾತ್, ಕುಂದಾ, ಬಾದಾಮಿ ಹಲ್ವಾ, ಬೇಸನ್ ಲಡ್ಡು, ಅಂಟಿನ ಉಂಡೆ, ಹಣ್ಣು ಮಿಶ್ರಣದ ಐಸ್ ಕ್ರೀಂ, ಬೀಡ, ಕಡ್ಲೆಬೇಳೆ– ಸಕ್ಕರೆ ಹಾಕಿ ಮಾಡಿದ ಮೃದುವಾದ ಹೋಳಿಗೆ ಆಹಾರೋತ್ಸವದ ವಿಶೇಷ.
ಊಟ ಮಾಡಿದ ಗ್ರಾಹಕರಿಗೆ ಎಕ್ಸ್ಪ್ರೆಸ್ ರಸಂ ಕ್ಯೂಬ್ನ ಕೊಡುಗೆ ಇದೆ. ಮಧ್ಯಾಹ್ನ 12ರಿಂದ 3 ಹಾಗೂ ಸಂಜೆ 7ರಿಂದ 9ರವರೆಗೆ ಕಂಸಾಳೆ ಪದ, ಡೊಳ್ಳುಕುಣಿತ, ನಂದಿಧ್ವಜ ಕುಣಿತಗಳ ಪ್ರದರ್ಶನ ಆಯೋಜಿಸಲಾಗಿದೆ. ಮಕ್ಕಳಿಗಾಗಿ ‘ಐ ಲವ್ ಮಯ್ಯಾಸ್’ ವಿಷಯದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳು ಬಿಡಿಸಿದ ಚಿತ್ರಗಳನ್ನು ರೆಸ್ಟೊರೆಂಟ್ ಒಳಗೆ ಒಂದು ವಾರ ಪ್ರದರ್ಶನಕ್ಕಿಡಲಾಗುತ್ತದೆ.
ಜಯನಗರ, ಮಲ್ಲೇಶ್ವರ, ವಿ.ವಿ.ಪುರಂ, ಪದ್ಮನಾಭನಗರ ಹಾಗೂ ಜೆ.ಪಿ.ನಗರದ ಶಾಖೆಗಳಲ್ಲಿ ಆಹಾರೋತ್ಸವ ನಡೆಯುತ್ತಿದೆ. ಒಂದು ಊಟಕ್ಕೆ ₹229.
ಊಟ ಮಾಡಿದ ಗ್ರಾಹಕರಿಗೆ ಎಕ್ಸ್ಪ್ರೆಸ್ ರಸಂ ಕ್ಯೂಬ್ನ ಕೊಡುಗೆ ಇದೆ. ಮಾಹಿತಿಗೆ ಮೊ– 96324 11352.