‘ಅದನ್ನು ನಂಬಿದ್ದ ನರೇಂದ್ರಬಾಬು, ಹಣದೊಂದಿಗೆ ಡಿ. 1ರಂದು ನಿಂಬೆಕಾಯಿಪುರ ಬಳಿ ಹೋಗಿದ್ದರು. ಅಲ್ಲಿಗೆ ಬಂದಿದ್ದ ಆರೋಪಿಗಳು, ಅವರ ಬಳಿಯ ₹4.5 ಲಕ್ಷವಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದರು. ‘ಘಟನೆ ಬಗ್ಗೆ ನರೇಂದ್ರ ಬಾಬು ನೀಡಿದ ದೂರಿನನ್ವಯ ವೆಂಕಟೇಶ್ ಅವರನ್ನು ಬಂಧಿಸಿ, ₹3.5 ಲಕ್ಷ ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ರಾಜೇಶ್ನನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.