ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ತೆರೆಸುವಂತಿದೆ

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ, ಗಡಿನಾಡ ಕನ್ನಡಿಗರ ಸ್ಥಿತಿಗತಿ ಕುರಿತು ಪ್ರಕಟವಾದ ಲೇಖನಗಳು (ಅಂತರಾಳ, ಡಿ. 3) ಬಹಳ ಮುಖ್ಯವಾದ ಅಂಶಗಳ ಮೇಲೆ ಬೆಳಕು ಚೆಲ್ಲಿವೆ. ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕೇರಳ ರಾಜ್ಯಗಳ ಸಮೀಪ ಇರುವ ಗಡಿನಾಡ ಕನ್ನಡಿಗರ ತಳಮಳವನ್ನು ವಿವಿಧ ಬರಹಗಾರರು ಪ್ರಸ್ತುತಪಡಿಸಿರುವುದು ಒಳನಾಡಿಗರ ಕಣ್ತೆರೆಸುವಂತಿದೆ.

ಕಾಸರಗೋಡಿನವರ ಹೋರಾಟ, ಸಂಘಟನಾ ಚಾತುರ್ಯ, ಸಾಮರ್ಥ್ಯವನ್ನು ಇತರ ಗಡಿನಾಡಿಗರೂ ಮೈಗೂಡಿಸಿಕೊಳ್ಳಬೇಕು. ಒಳನಾಡಿನವರು, ಮುಖ್ಯವಾಗಿ ಆಳುವವರು ಕನ್ನಡದ ನೆಲ, ಜಲ, ಜನರ ರಕ್ಷಣೆಗಾಗಿ ಟೊಂಕ ಕಟ್ಟಿ ನಿಲ್ಲಬೇಕು.
-ಬಿ.ಆರ್.ಅಣ್ಣಾಸಾಗರ, ಸೇಡಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT